Thursday, 30 April 2015

MATHS TRICK FOR 12

MATHS TRICK:
Multiply any large number by 12 mentally in seconds. To multiply any number by 12, just double the last digit& thereafter double each digit and add it to its neighbour.
EX: 21314 * 12 =  255768.
Lets break it into simple steps:

Step 1: 021314 * 12 =  _____8.
(Double of Last Digit 4= 8 ).

Step 2: 021314 * 12 =  ____68.
(Now Double 1= 2, and add it to 4, 2+4=6).

Step 3: 021314 * 12=   ___768.
(Now Double 3=6, and add it to 1, 6+1=7).

Step 4: 021314 * 12=   __5768.
(Now Double 1=2, and add it to 3, 2+3=5).

Step 5: 021314 * 12=   _55768.
(Now Double  2=4, and add it to 1, 4+1=5).

Step 6: 021314 * 12=   255768.
(Now Double 0=0, and add it to 2, 0+2=2).

So your final answer of 21314*12 = 255768.

MSG BY: DEEPAK.S.G(GKLIGHTS).

SOURCE: GATHERED FROM 'MATHS TRICKS WEBSITES'.

Thursday, 23 April 2015

ವಿಶ್ವ ಪುಸ್ತಕ ದಿನದ ಕುರಿತು ಒಂದು ಲೇಖನ

ಇಂದು (23 ಏಪ್ರೀಲ್ 2015) ವಿಶ್ವ ಪುಸ್ತಕ ದಿನ!

ಪುಸ್ತಕ ಎಂದಾಕ್ಷಣ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಹೇಳಿದ ಅದ್ಭುತ ಮಾತು ನೆನಪಿಗೆ ಬರುತ್ತದೆ. ಅದೇನೆಂದರೆ, " ಈ ಜಗತ್ತು ಕಂಡಿರುವ ಮನುಷ್ಯ ನಿರ್ಮಾಣದ ಅತ್ಯಂತ ಗಮನಾರ್ಹ ಸೃಷ್ಟಿಯೆಂದರೆ ಪುಸ್ತಕಗಳು. ಏನು ಅಳಿದರೂ ಪುಸ್ತಕಗಳು ಬದುಕಿ ಉಳಿದಿರುತ್ತವೆ. ಮನುಷ್ಯ ಕಟ್ಟಿರುವುದು ಯಾವುದೂ ಸ್ಥಿರವಾಗಿ ನಿಲ್ಲುವುದಿಲ್ಲ. ಕೀರ್ತಿ ಸ್ತಂಭಗಳು ಕುಸಿದು ಬೀಳುತ್ತವೆ, ರಾಷ್ಟ್ರಗಳು ನಾಶಗೊಳ್ಳುತ್ತವೆ. ನಾಗರಿಕತೆಗಳಿಗೆ ವೃದ್ಧಾಪ್ಯ ಬಂದು ಅವೂ ಸತ್ತು ಹೋಗುತ್ತವೆ, ಆದರೆ ಪುಸ್ತಕಗಳಿಗೆ ಸಾವು ಬರುವುದಿಲ್ಲ ." ಪಾಪು ಅವರದು ಎಷ್ಟೊಂದು ಅದ್ಭುತ ನುಡಿಯಲ್ಲವೇ?

ಹಿನ್ನೆಲೆ:
1923ರ ಏಪ್ರಿಲ್ 23ರಂದು ಸ್ಪೇನ್‌ನಲ್ಲಿ ಮಿಗೆಲ್‌ದ ಸೆರ್ವಾಂಟಿಸ್ ನಿಧನರಾದರು. ವಿಶ್ವ ಸಾಹಿತ್ಯಕ್ಕೆ 'ಡಾನ್ ಕ್ವಿಕ್ಸೋಟ್‌' ಕೊಟ್ಟ ಅಮರ ಲೇಖಕನಾತ. ಅವರ ಗೌರವಾರ್ಥವಾಗಿ ಆ ದಿನ ಪುಸ್ತಕ ದಿನವನ್ನಾಗಿ ಸ್ಪೇನ್‌ನ ಪುಸ್ತಕ ವ್ಯಾಪಾರಿಗಳು, ಪ್ರ ಕಾಶಕರು 1923ರಿಂದಲೇ ಆಚರಿಸಲಾರಂಭಿಸಿದರು. ಕಾಕತಾಳೀಯವೆಂಬಂತೆ ಅದೇ ದಿನ ಶೇಕ್ಸ್‌ಪಿಯರನ ಜನ್ಮದಿನವೂ,  ಮರಣ ದಿನವೂ ಹೌದು. ಹಾಗಾಗಿ ಪ್ರ ತಿ ಏಪ್ರಿಲ್ 23 ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುವಂತೆಯೂ, ಪುಸ್ತಕದ ಕುರಿತು, ಲೇಖಕರ ಕುರಿತು, ಗ್ರಂಥ ಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವಂತೆಯೂ, ಓದಿನ ಅಭಿರುಚಿ  ಪುಸ್ತಕ ಪ್ರೀತಿ ಬೆಳೆಸುವಂತಹ ದಿನವನ್ನಾಗಿ ಆಚರಿಸುವಂತೆಯೂ ವಿಶ್ವ ಸಂಸ್ಥೆ ಕರೆ ನೀಡಿದೆ. 1995ರ ಏಪ್ರಿಲ್ 23ರಿಂದ ಈ ಪುಸ್ತಕ ದಿನ ವಿಶ್ವಾದ್ಯಂತ ಆಚರಣೆಯಲ್ಲಿದೆ.

ವಾಸ್ತ ವತೆ:
ಲೋಕವೇನೋ ಸೃಷ್ಟಿಯಾಯಿತು. ಆ ಸೃಷ್ಟಿ ಪಿರಮಿಡ್‌ನ ತುದಿಯಲ್ಲಿ ಮಾನವನದೂ ಸೃಷ್ಟಿಯಾಯಿತು. ಪರಿಪೂರ್ಣತೆಗೆ ಆ ಮಾನವ ಇನ್ನೊಂದು ಲೋಕವನ್ನು ಸೃಷ್ಟಿಸಿಕೊಂಡ - ಅದೇ ಪುಸ್ತಕ ಲೋಕ. ಹೌದು, ಜಗತ್ತಿನ ಸಂಸ್ಕೃತಿ, ನಾಗರಿಕತೆಗಳಿಗೆ ಪುಸ್ತಕ ಸಂಸ್ಕೃತಿಯೇ ಬುನಾದಿ. ಪುಸ್ತಕ ಸ್ವರೂಪ ಕಂಡುಹಿಡಿದ ಆ ವಿಜ್ಞಾನಿಗೆ ಮೊದಲು ನಮಸ್ಕರಿಸೋಣ. ಪುಸ್ತಕಗಳಿವೆಯೆಂದೇ ನಾವು ಜಗತ್ತನ್ನೂ, ಅದು ವಿಕಾಸಗೊಂಡ ಬಗೆಯನ್ನೂ ಬಲ್ಲೆವು. ಜ್ಞಾನದ ದೀವಿಗೆ ಸದಾ ಬೆಳಗುತ್ತಿರುವುದೇ ಪುಸ್ತಕಗಳಿಂದ. ಪುಸ್ತಕಗಳೇ ಇರದಿದ್ದರೆ ಅಕ್ಷರಗಳಿಗೆ ಅರ್ಥವಾದರೂ ಎಲ್ಲಿರುತ್ತಿತ್ತು? ಲೋಕದ ಜ್ಞಾನವೇನಿದ್ದರೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಮಾತ್ರ ದೊರೆತೀತು ಎಂಬ ಭಾವನೆ ಸಲ್ಲದು. ಮನೆಯಲ್ಲೊಂದು ಗ್ರಂ ಥಾಲಯವಿಟ್ಟುಕೊಂಡರೆ ಸಮೃದ್ಧ ಜ್ಞಾನವೇ ಅಲ್ಲಿರುತ್ತದೆ. ಗಾಳಿಯಾಡಲು, ಬೆಳಕು ಬೀರಲು ಕಿಟಕಿಗಳಿರುವಂತೆ, ಜ್ಞಾನ ನೀಡಲು ಮನೆಯಲ್ಲಿ ಪುಸ್ತಕಗಳಿರಲೇ ಬೇಕು. ಅಡುಗೆ ಮನೆ, ರೆಫ್ರಿಜರೇಟರ್‌ಗಳೇನಿದ್ದರೂ ನಮ್ಮ ದೈಹಿಕ ಆಹಾರಗಳನ್ನು ಒದಗಿಸಲು. ಆದರೆ, ಅದಕ್ಕಿಂತ ಅಥವಾ ಅದರಷ್ಟೇ ಮುಖ್ಯ ನಮಗೆ ನಮ್ಮ ಮನೆಯ ಪುಟ್ಟ ಗ್ರಂಥಾಲಯವೂ ಆಗಬೇಕು. ಪುಸ್ತಕಗಳ ಓದಿನ ಪರಿಣಾಮ ಮನೆ ಮಂದಿಯ ಮೇಲೆ ಆದಂತೆ, ಮನೆಯ ಪುಟಾಣಿಗಳಿಗೂ ಓದಿನ ರುಚಿ ಅಂಟುತ್ತದೆ. ಆ ಅಭಿರುಚಿಯಿಂದಲೇ ನಮ್ಮ ಭಾವ ಸಂಸ್ಕಾರಗೊಳ್ಳುತ್ತದೆ. ಕ್ರಾಂತಿಯ ವಿಚಾರ ಒತ್ತಟ್ಟಿಗಿರಲಿ, ಪುಸ್ತಕಗಳಿಂದ ಭಾವ ಸಂಸ್ಕಾರವಂತೂ ಖಂಡಿತ ಆಗುತ್ತದೆ. ಯಾರೇ ದೊಡ್ಡ ಸಾಧಕರನ್ನು ನೆನಪಿಸಿಕೊಳ್ಳಿ. ಪಂಡಿತ ವಿದ್ವಾಂಸರಂತೂ ಸರಿಯೇ ಸರಿ. ವಿಜ್ಞಾನಿಯೋ, ಸಾರ್ವಜನಿಕ ನಾಯಕನೋ, ದೊಡ್ಡ ಉದ್ಯಮಿಯೋ, ಅತ್ಯುತ್ತಮ ಶಿಕ್ಷಕನೋ, ಉತ್ಕೃಷ್ಟ ವಕೀಲನೋ, ಅತ್ಯುತ್ತಮ ವೈದ್ಯನೋ  ಹೀಗೆ ಸಮಾಜಕ್ಕೆ ಒಳಿತನ್ನು ಮಾಡಿಹೋದ, ಮಾಡುತ್ತಿರುವ ಯಾರನ್ನೇ ಗಮನಿಸಿ, ಆತ ಖಂಡಿತವಾಗಿಯೂ ಅತ್ಯುತ್ತಮ ಓದುಗನಾಗಿರುತ್ತಾನೆ. ಓದಿ ಓದಿಯೇ ಆತ ಸಾಧಕನಾಗಿರುತ್ತಾನೆ. ಜಗತ್ತಿನ ದೊಡ್ಡ ಶ್ರೀಮಂತ, ಸಾಫ್ಟ್‌ವೇರ್ ತಂತ್ರಜ್ಞ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಒಂದು ಸಂದರ್ಶನದಲ್ಲಿ ಅವರು ಹೇಳಿದ್ದೇನು ಗೊತ್ತೇ? 'ಎಲ್ಲಿಯೇ ಹೋಗುವಾಗಲೂ ನನ್ನ ಬ್ರೀಫ್‌ಕೇಸ್ ತುಂಬ ಪುಸ್ತಕಗಳನ್ನಿಟ್ಟುಕೊಂಡಿರುತ್ತೇನೆ. ವಿಮಾನ ಎಷ್ಟೇ ತಡವಾಗುವ ಪ್ರ ಸಂಗ ಬಂದರೂ, ಯಾರಿಗೇ ಆಗಲಿ ಕಾಯಬೇಕಾದ ಸಂದರ್ಭ ಒದಗಿದರೂ ನನಗೆ ನಷ್ಟವೆನಿಸುವುದಿಲ್ಲ. ಏಕೆಂದರೆ, ಅಂತಹ ಎಲ್ಲ ಸಂದರ್ಭಗಳಲ್ಲೂ ನನ್ನ ಕೈಯಲ್ಲಿ ಪುಸ್ತಕ ಇದ್ದೇ ಇರುತ್ತದೆ' ಎಂದು. ಓದಲು ಬಾರದ ನಿರಕ್ಷರಿಗೂ, ಓದುವ ಹವ್ಯಾಸವೇ ಇರದ ಸಾಕ್ಷರಿಗೂ ವಿಶೇಷ ವ್ಯತ್ಯಾಸವಿಲ್ಲ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ. ಓದದೇ ನಾವು ಬೆಳೆಯಲಾರೆವು. ಯಾವ ವೃತ್ತಿಯಲ್ಲಿದ್ದರೂ ಸರಿ, ದಿನ ದಿನವೂ ಬೆಳೆಯುತ್ತಿರಬೇಕು. ನಿನ್ನೆಗಿಂತ ಇಂದಿನ ನಮ್ಮ ಮೌಲ್ಯ ಹೆಚ್ಚಾಗುತ್ತಿರಬೇಕು. ಪ್ರ ತಿದಿನವೂ ನಾವು ಅಪ್‌ಡೇಟ್ ಆಗುತ್ತಿರಬೇಕು. ಜ್ಞಾನ ಶ್ರೀಮಂತಿಕೆಯಲ್ಲಿ, ಔದಾರ್ಯದಲ್ಲಿ, ಮಾನವತೆಯಲ್ಲಿ ನಾವು ಏರುತ್ತಲೇ ಇರಬೇಕು. ಜಗತ್ತಿನ ಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇಂದಿನ ವಿಜ್ಞಾನ-ತಾಂತ್ರಿಕತೆಯಿಂದಾಗಿ, ಪ್ರ ತಿ ಐದು ವರ್ಷಕ್ಕೆ ಜಗತ್ತಿನ ಜ್ಞಾನ ದ್ವಿಗುಣಗೊಳ್ಳುತ್ತಿದೆಯಂತೆ. ತಾಂತ್ರಿಕತೆಯಂತೂ ಪ್ರ .ತಿ ಒಂದೂವರೆ ವರ್ಷಕ್ಕೆ ಹಳೆಯದಾಗುತ್ತಿದೆಯಂತೆ. ನಾವು ಓದಿ ತಿಳಿದುಕೊಳ್ಳದೇ ಹೋದರೆ, ಮುಂದೊಂದು ದಿನ ನಾವು ನಗಣ್ಯರೆನಿಸಿಬಿಡುತ್ತೇವೆ.

      ಇಂದು ಬಹಳಷ್ಟು  ಜನರ ಗೊಣಗಾಟವೆಂದರೆ, 'ಓದಿಗೆ ಸಮಯವೇ ಇಲ್ಲ. ನಮ್ಮ ಕೆಲಸದ ಹೊರೆಯೇ ಸಾಕಷ್ಟಿರುವಾಗ ಓದಲು ಪುರುಸೊತ್ತಾದರೂ ಎಲ್ಲಿರುತ್ತದೆ?' ಎಂಬುದು. ಇದು ಓದಿನ ರುಚಿ ತಿಳಿಯದ ಹೆಡ್ಡನಾಡುವ ಮಾತುಗಳು. ಓದಿನ ಮೌಲ್ಯವರಿಯದ ಮೂಢನ ಮಾತು. ಸೋಮಾರಿಯೊಬ್ಬನ ಸಮರ್ಥನೆಯ ನುಡಿಗಳಿವು. ಓದುವ ಚಟ ಅಂಟಿಸಿಕೊಂಡ  ಮನುಷ್ಯನು ಪ್ರ   ತಿದಿನ ಓದದೆ ಸಮಾಧಾನಪಡಲಾರ. ಓದದೇ ನಿದ್ದೆ ಹೋಗಲಾರ. 'ಅನ್ ಟು ದಿ ಲಾಸ್ಟ್‌' ಗಾಂಧೀಜಿಯವರ ಮೇಲೆ ಗಾಢ ಪರಿಣಾಮ ಬೀರಿದ ಕೃತಿಯಂತೆ. ಪ್ರ ತಿಯೊಬ್ಬ ದೊಡ್ಡ ವ್ಯಕ್ತಿಯೂ ಪುಸ್ತಕಗಳಿಂದ ಪ್ರ ಭಾವಿತರಾದವರೇ. ಪುಸ್ತಕಗಳಿಂದಲೇ ದೊಡ್ಡವರಾದವರು. ಅದನ್ನು ಅರಿಯದ ದುರಂತ ಇಂದು ನಮ್ಮೆದುರಿಗಿದೆ. ನಮ್ಮ ಹಿಂದಿನ ರಾಜಕಾರಣಿಗಳೂ ಪುಸ್ತಕ ಓದುತ್ತಿದ್ದರು. ರಾಜಾಜಿ- ರಾಧಾಕೃಷ್ಣನ್ ಅವರಂಥವರ ಮಾತು ಬಿಡಿ, ನಮ್ಮ ರಾಜ್ಯದ ನಿಜಲಿಂಗಪ್ಪ-ಅರಸು-ರಾಮಕೃಷ್ಣ ಹೆಗಡೆ ಮುಂತಾದವರು ವಿಪುಲ ಓದುಗರಾಗಿದ್ದರು. ರಾಜಕಾರಣದಿಂದ ಸರಿದ ನಂತರವೂ ಅವರ ಬದುಕನ್ನು ವಿಸ್ತರಿಸಿದ್ದು ಪುಸ್ತಕಗಳೇ. ಆ ವ್ಯತ್ಯಾಸ ಈಗಿನ ರಾಜಕಾರಣಿಗಳಲ್ಲಿ ಗುರುತಿಸಬಹುದು. ಅಂತೆಯೇ ದಿನದಿನವೂ, ಪ್ರ ತಿ ಪಾಠದ ಮೊದಲೂ ಓದಲೇಬೇಕಾದ ಶಿಕ್ಷಕರೂ ಓದುತ್ತಿಲ್ಲ. ಓದಿ ಬೆಳೆಯುತ್ತಿಲ್ಲ. ಅದರ ಪರಿಣಾಮವನ್ನು ಅವರು ತಯಾರಿಸಿ ಹೊರಹಾಕುತ್ತಿರುವ ಉತ್ಪಾದನೆಯಲ್ಲಿ ಕಾಣುತ್ತಿದ್ದೇವೆ. ಓದಿನ ರುಚಿ ಮೊತ್ತ ಮೊದಲಿಗೆ ಬೆಳೆಸಬೇಕಾದವರು ಪಾಲಕರು. ನಂತರ ಖಂಡಿತವಾಗಿಯೂ ಶಿಕ್ಷಕರು. ಇಂದಿನ ದಿನಗಳಲ್ಲಿ ಈ ಇಬ್ಬರೂ ಬೇರೆ ಹವ್ಯಾಸಗಳಿಗೆ ಅಂಟಿಬಿಟ್ಟಿರುವುದು ನಾವು ನೋಡುತ್ತಿದ್ದೇವೆ. ಅದು ಹಾಗಾಗಬಾರದು. ಪುಸ್ತಕಗಳೊಂದಿಗಿರುವವನು ಎಂದಿಗೂ ಒಬ್ಬಂಟಿಯಾಗಿರಲಾರ. ತನ್ನ ಅಪೂರ್ಣತೆಯನ್ನು ಓದಿನ ಮೂಲಕ ತುಂಬಿಕೊಳ್ಳಬಹುದು. ಜ್ಞಾನಕ್ಕೆ ಸರಿಸಮ ಯಾವುದೂ ಇಲ್ಲವೆಂದು ಋಷಿವಾಣಿ ಹೇಳುತ್ತದೆ. ಪುಸ್ತಕಗಳೊಂದಿಗೆ ಇರುವಾತ ಕಾಲಾತೀತವಾದ ಮನುಷ್ಯ ಚೇತನದೊಂದಿಗೆ ಇರುವಂತೆ ಎಂದು ನಂಬಿದ ಗ್ರಂಥಪಾಲಕರೊಬ್ಬರು - ಕೆ.ಎಸ್. ದೇಶಪಾಂಡೆ- ತಾವು ವಿನ್ಯಾಸ ಮಾಡಿದ ಗ್ರಂಥಾಲಯಕ್ಕೆ Timeless spirit of Man' ಎಂದು ಹೆಸರಿಸಿದ್ದಾರೆ. ಸಾರ್ಥಕ ಗಿಡಮರಗಳ ಫಲಕ್ಕೆ ಆಯುರ್ಮಿತಿಯಿದೆ. ಗ್ರಂಥಾಲಯಗಳ ಪ್ರಭಾವಕ್ಕೆ ಪರಿಮಿತಿ ಇರಲಾರದು. ಓದು ಬಲ್ಲವನೇ ತತ್ವಜ್ಞಾನಿ  ತತ್ವಜ್ಞಾನಿಯೇ ರಾಜನಾಗಬೇಕು ಎಂಬ ಪ್ಲೇಟೋನ ನಿಲುವಿನಲ್ಲಿ ಅರ್ಥವಿದೆ. ಈಗಿನ ಅನುಕೂಲಸ್ಥರು ಪುಸ್ತಕಗಳನ್ನು ಓದುವ ಉತ್ಕೃಷ್ಟ ಹವ್ಯಾಸದಿಂದ ದೂರವಾಗುತ್ತಿದ್ದಾರೆ. ನಾಗರಿಕತೆ ಬೆಳೆಯದಿದ್ದಾಗ ನಿರಕ್ಷರತೆ ಇತ್ತು. ಈಗ ನಾಗರಿಕತೆ ಬೆಳೆದಿದೆ  ಸಾಂಸ್ಕೃತಿಕ ಅನಾಗರಿಕತೆ ಉಳಿದುಬಿಟ್ಟಿದೆ. ಸಾಂಸ್ಕೃತಿಕವಾಗಿ ನಾವು ವಿದ್ಯಾವಂತ ನಿರಕ್ಷರಿಗಳಾಗುತ್ತಿರುವುದು ಈಗಿನ ದೊಡ್ಡ ದುರಂತವಾಗಿದೆ. ಹಾಗಾಗದಿರಲಿ. ಪುಸ್ತಕಗಳನ್ನು ಹಚ್ಚಿಕೊಳ್ಳೋಣ. ಈ ದಿನ ಒಂದು ಕನ್ನಡದ/ಬೇರೆ ಭಾಷೆಯ ಒಳ್ಳೆಯ ಪುಸ್ತಕ ಓದೋಣ.

     ತಮ್ಮೆಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆಯ
             ಹಾರ್ದಿಕ ಶುಭಾಶಯಗಳು.

Monday, 20 April 2015

BASAVA JAYANTI 2024

ಬಸವ ಜಯಂತಿ ಪ್ರಯುಕ್ತ  ಬಸವಣ್ಣನವರ ಕುರಿತು ಲೇಖನ:


ಎಲ್ಲರಿಗೂ 26/04/2024 ರಂದು ಶ್ರೀ ಬಸವಣ್ಣನವರ 891 ನೇ ಜಯಂತಿಯ ಹಾರ್ದಿಕ ಶುಭಾಶಯಗಳು.

ಬಸವಣ್ಣನವರು  ಒಬ್ಬ ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಗಳು ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರ & ಸಾಧನೆಗಳನ್ನೂ ಕಾಣಬೇಕಾಗಿದೆ.

ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ ಹೀಗೆ ಪುನಾರಚಿಸಬಹುದು. ಕಾಲ ಸುಮಾರು 12 ನೇ ಶತಮಾನ(1134). ಹುಟ್ಟಿದ್ದು ಬಾಗೇವಾಡಿಯಲ್ಲಿ (ಇಂಗಳೇಶ್ವರ ಅಂತಲೂ ಕೆಲವರ ಊಹೆ).ಈಗ ಅದು ಬಿಜಾಪುರ ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಸುಪ್ರಸಿದ್ಧ ಅಗ್ರಹಾರವಾಗಿತ್ತು. ತಂದೆ ಅದರ ಅಧಿಪತಿ -ಮಾದರಸ(ಮಾದಿರಾಜ). ತಾಯಿ- ಮಾದಲಾಂಬೆ. ದೇವರಾಜ -ಅಣ್ಣ,.ನಾಗಮ್ಮ -ಅಕ್ಕ. .ಬಾಗೇವಾಡಿಯ ಪ್ರಸಿದ್ಧ ದೈವ- ಬಸವೇಶ್ವರನ ಅನುಗ್ರಹದಿಂದ ನಂದೀ ವ್ರತದ ಫಲವಾಗಿ ಇವರು ಜನಿಸಿದರು ಎನ್ನಲಾಗಿದೆ. ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿದ ಕುತೂಹಲ ಜಾಣ್ಮೆ ಜಾಗೃತಿಗಳನ್ನು ವ್ಯಕ್ತಪಡಿಸತೊಡಗಿದರು. ಎಂಟರ ಪ್ರಾಯದಲ್ಲೆ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಒರೆ ಹಚ್ಚುವ ಪ್ರೌಢ ವಿಚಾರ ಸರಣಿ ಇವರಲ್ಲಿ ಗೋಚರವಾಯಿತು. ಉಪನಯನವನ್ನು ಒಪ್ಪದೆ ತಿರಸ್ಕರಿಸಿ ನಡೆದರೆಂದು ಕೆಲವು ಪುರಾಣಕರ್ತೃಗಳು ಹೇಳಿದರೆ, ಉಪನಯನವಾದ ಕೆಲವು ಕಾಲಾನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದು ಹರಿಹರ ಕವಿ ಹೇಳುತ್ತಾನೆ. ಅದೇನೇ ಇರಲಿ, ವೈದಿಕ ಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ ಅದರಿಂದ ಸಮಾಜದಲ್ಲಿ ಉಂಟಾದ ಮೇಲು ಕೀಳುಗಳನ್ನೂ ಇವರು ಒಪ್ಪಿಕೊಳ್ಳಲಾರದೇ ಹೋದರೆಂಬುದಂತೂ ಸತ್ಯ.. ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸುವುದಕ್ಕಾಗಿ ಯಜ್ಞೋಪವೀತವನ್ನು ಕಿತ್ತು ಹಾಕಿದ್ದರಿಂದ ಬಹಿಷ್ಕೃತರಾಗಿ ಹುಟ್ಟೂರನ್ನು ಬಿಟ್ಟು ಅಕ್ಕ -ನಾಗಮ್ಮನೊಡನೆ ಸಂಗಮ ಕ್ಷೇತ್ರಕ್ಕೆ ಹೋದರು. ಈ ವೇಳೆಗೆ ಆಕೆಗೆ ಮದುವೆಯಾಗಿದ್ದು ಅವಳ ಪತಿ -ಶಿವಸ್ವಾಮಿ ಬಹುಶಃ ಸಂಗಮದವನೇ ಆಗಿದ್ದಂತೆ ತೋರುತ್ತದೆ. ಆ ಕಾಲದಲ್ಲಿ ಸಂಗಮ ಕ್ಷೇತ್ರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಅದರ ಸ್ಥಾನಪತಿಗಳಾದ ಜಾತವೇದ ಮುನಿ ಅಥವಾ ಈಶಾನ್ಯ ಗುರುಗಳು ಸಂಗಮೇಶ್ವರ ಸ್ವಾಮಿಗಳೆಂದು ಪ್ರಸಿದ್ಧರಾಗಿದ್ದರು. ಅವರ ಸಮ್ಮುಖದಲ್ಲಿ ದೀಕ್ಷಾ ವಿಧಿಯೊಡನೆ ಇವರ ವಿದ್ಯಾಭ್ಯಾಸ ಹನ್ನೆರಡು ವರ್ಷ ನಡೆಯಿತು. ಕೃಷ್ಣಾ ಮಲಪ್ರಭಾ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ, ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ಒಪ್ಪವೀಯಿತು. ಹರಿತವಾದ ಬುದ್ಧಿಗೆ ಸಾಣೆ ಹಿಡಿದಂತಾಯಿತು. ಕಳಚೂರ್ಯ ಬಿಜ್ಜಳನ ಬಳಿ ದಂಡ ಧೀಶನಾಗಿದ್ದ ಇವರ ಸೋದರಮಾವ-ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಇವರಿಗೆ ಮದುವೆ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ನೂತನ ದಂಪತಿಗಳನ್ನು ಸಂಗಮದಿಂದ ಮಂಗಳವಾಡಿಗೆ ಹೋಗ ಹೇಳಿದರು. ಇವರ ಜೊತೆ ಶಿವಸ್ವಾಮಿ ನಾಗಮ್ಮರೂ ಹೊರಟರು. ಮಂಗಳವಾಡಕ್ಕೆ ಬಂದ ಮೇಲೆ ಬಸವಣ್ಣ ಗಂಗಾಂಬಿಕೆಯ ಜೊತೆಗೆ ನೀಲಲೋಚನೆ (ನೀಲಾಂಬಿಕೆ)ಯನ್ನೂ ಮದುವೆಯಾಗಬೇಕಾಯಿತು. ನೀಲಾಂಬಿಕೆ ಬಿಜ್ಜಳನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು. ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಆತನ ಸಾಕು ತಂಗಿಯಾಗಿ ಬೆಳೆದವಳು. ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪಕಾಲದಲ್ಲಿಯೆ ರಾಜ್ಯ ಭಂಡಾರದ ಮಂತ್ರಿಯಾದ ಬಲದೇವರು ದೈವಾಧೀನರಾಗಲು ಅವರ ಸ್ಥಾನಕ್ಕೆ ಬಸವಣ್ಣನವರನ್ನೇ ನೇಮಕ ಮಾಡಲಾಯಿತು. ರಾಜ್ಯದ ಭಂಡಾರಿಯಾದ ಬಸವಣ್ಣ ಕ್ರಮೇಣ ಅಂತರಂಗದ ಸಾಧನೆಯಿಂದಾಗಿ ಭಕ್ತಿ ಭಂಡಾರಿಯೂ ಆದರು. ಅಲ್ಲದೆ ತನ್ನ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕರಕ ಭಾವನೆಗಳಿಗೆ ಅನುಸಾರ ಸಾಮಾಜಿಕ ಕ್ರಾಂತಿಗೂ ಕೈ ಹಾಕಿದರು. ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೆ ಅಂದಿನ ರಾಜಕೀಯದಲ್ಲಿ ಬದಲಾವಣೆ ತಲೆದೋರಿತು. ಚಾಲುಕ್ಯ ಅರಸು ದುರ್ಬಲನಾಗಿದ್ದುದರಿಂದ ಸಾಮಂತ ಬಿಜ್ಜಳ ತಾನೇ ಚಕ್ರವರ್ತಿಯಾಗಿ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ಆಗ ಬಸವಣ್ಣನವರು ಇಡೀ ರಾಜ್ಯದ ಮಹಾಭಂಡಾರಿಯಾದರು. ಬಸವಣ್ಣನವರ ಅಧಿಕಾರ ಕ್ಷೇತ್ರವೂ ಧಾರ್ಮಿಕ ಕ್ಷೇತ್ರವೂ ವ್ಯಾಪಕಗೊಂಡವು. ಸುಮಾರು ೧೨ ವರ್ಷಗಳ ಕಾಲ ಕಲ್ಯಾಣ ಬಸವಣ್ಣನವರ ಕಾರ್ಯ ಕ್ಷೇತ್ರವಾಗಿತ್ತು. ಈ ಅಲ್ಪಾವಧಿಯಲ್ಲಿ ಇವರು ಸಾಧಿಸಿದ ಪರಿಣಾಮ, ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದದು.ಬಸವಣ್ಣನವರು ಇಡೀ ಯುಗವನ್ನು ಎಚ್ಚರಿಸಿದ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಚುಂಬಕ ಗಾಳಿಯಂತೆ ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆದು ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ ಅವರ ವಿಚಾರಮಂಥನದಿಂದ ಧರ್ಮದ ನವನೀತವನ್ನು ತೆಗೆದರು. ಅಲ್ಲಮಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ತಿತ್ತವೂ ಬಸವಶಕ್ತಿಗೆ ಮಣಿದು ಕಲ್ಯಾಣದಲ್ಲಿ ಕೆಲವು ಕಾಲ ಅನುಭವಮಂಟಪವನ್ನು ನಿರ್ದೇಶಿಸಿತು. ಬಸವಣ್ಣನವರ ಕ್ರಾಂತಿಕಾರಕ ಭಾವನೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಅವರನ್ನು ಪದಚ್ಯುತಗೊಳಿಸಲು ಆ ಪರಂಪರೆಯ ಅನುಯಾಯಿಗಳು ಹೊಂಚಿದರು. ಬಸವಣ್ಣನವರು ರಾಜ್ಯಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವನೆಂದು ದೂರಿ ಬಿಜ್ಜಳನಲ್ಲಿಗೆ ಇತರ ಅನೇಕ ಆರೋಪಗಳನ್ನು ಕೊಂಡೊಯ್ದರು. ಅವೆಲ್ಲವೂ ವ್ಯರ್ಥವಾದವು. ಆದರೆ ಅಸ್ಪೃಶ್ಯರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸನ ಮಗಳಿಗೂ ವಿವಾಹ ಮಾಡಿದಾಗ ಅದನ್ನು ಅಂದಿನ ಸಮಾಜ ಅರಗಿಸಿಕೊಳ್ಳಲಾರದೆ ಹೋಯಿತು. ವರ್ಣಸಂಕರವಾಯಿತೆಂದು ಸಂಪ್ರದಾಯಸ್ಥರು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆ ವಿಧಿಸುವಂತಾಯಿತು. ಅದಾದ ಸ್ವಲ್ಪ ಕಾಲದಲ್ಲಿಯೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಈ ಬೆಳವಣಿಗೆಗಳಿಂದ ಬೇಸರಗೊಂಡು ಮೊದಲೇ ಕಲ್ಯಾಣವನ್ನು ಬಿಟ್ಟಿದ್ದ ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಹೋಗಿ ಕೂಡಲ ಸಂಗಮನಲ್ಲಿ ಐಕ್ಯರಾದರು. ಇದು ಸುಮಾರು ೧೧೬೭-೬೮ರಲ್ಲಿ ಸಂಭವಿಸಿರಬೇಕೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಇದು ಒಂದು ರೀತಿಯಲ್ಲಿ ವಿವಿಧ ಪುರಾಣಗಳು ಚಿತ್ರಿಸಿದಂತೆ ಪಾವನ ಎನಿಸಿರುವ ಬಸವಣ್ಣನವರ ಜೀವನ ಕಥೆಯ ರೂಪರೇಷೆ.

ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಇವರ ಅಂತರಂಗದ ಕಥೆ. ಇವರ ವಚನಗಳಲ್ಲಿ ಅದರ ಉಜ್ವಲ ಚಿತ್ರ ಮೂಡಿದೆ. ತ್ರಿವಿಧ ದಾಸೋಹದಿಂದ ಷಟ್ ಸ್ಥಲದ ನಿಚ್ಚಣಿಕೆ ಏರಿ ಲಿಂಗಾಂಗ ಸಾಮರಸ್ಯದ ನಿಲವಿಗೇರಿದುದನ್ನು ಅಲ್ಲಿ ಕಾಣಬಹುದು. ಅಂತೆಯೇ ಇವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗು ಹರಿದು ಸರ್ವತ್ರ ಮಾನ್ಯವಾಗಿ ನಿಲ್ಲಬಲ್ಲ ಅಸಾಧಾರಣತೆಯನ್ನೂ ಜೀವಂತಿಕೆಯನ್ನೂ ಪಡೆದಿವೆ. ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಮುಖ್ಯ ತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಬಾರದು. ಅಂಥ ನೈತಿಕ ಜೀವನವನ್ನೂ ಸಾಮಾಜಿಕ ಸಮತೆಯನ್ನೂ ಸಾಧಿಸುವ ಸಾಹಸ ಅವರದು. ಹರಳಯ್ಯ, ,ಮಾದಾರ ಧೂಳಯ್ಯ, , ಡೋಹರ ಕಕ್ಕಯ್ಯ, ,ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ತ್ವದ ಆಶ್ರಯ ಪಡೆದು ಶರಣರಾದರು., ಅನುಭಾವಿಗಳಾದರು, ವಚನಕಾರರಾದರು; ಬಸವಣ್ಣನವರ ಮಹದಾಶೆಯ ಸಾಕಾರ ಮೂರ್ತಿಗಳಾದರು. ತಮಗಿಂತ ಹಿಂದಿನಿಂದಲೂ ಪ್ರಚಲಿತವಿದ್ದ ವೀರಶೈವ ಮತವನ್ನು ಅನೇಕ ಪರಿಷ್ಕರಣೆಗಳೊಂದಿಗೆ ಇತರ ನೂರಾರು ವಚನಕಾರರ ಜೊತೆ ಸೇರಿ ಪ್ರಚಾರ ಮಾಡಿದವರು ಬಸವಣ್ಣನವರು. ಬಸವಣ್ಣನವರ ಕಾಯಕದ ಕಲ್ಪನೆ ಇದೆಲ್ಲವನ್ನೂ ಸಾಧಿಸುವ ಸಮಗ್ರ ಜೀವನ ದರ್ಶನವನ್ನು ಒಳಗೊಳ್ಳುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವೇ ಅಲ್ಲದೆ ಸಮಾಜಕ್ಕೂ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ಅಲ್ಲದೆ ಈ ಕಾಯಕ ತತ್ತ್ವದ ಇನ್ನೊಂದು ಅಂಶವೆಂದರೆ ವ್ಯಕ್ತಿ ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧನಾಗಬೇಕು. ಅಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು. ಗಾಂಧೀಜಿ ಒತ್ತಿ ಹೇಳಿದ ಅಸಂಗ್ರಹ ತತ್ತ್ವ ಇಲ್ಲಿ ಕಂಡುಬರುತ್ತದೆ. ಇದು ಧಾರ್ಮಿಕ ಸಮತೆಗೂ ತಳಹದಿಯಾಗಿ ಸ್ತ್ರೀಪುರುಷರೆಂಬ ಭೇದವನ್ನು ಅಳಿಸಿ ಹಾಕಿತು. ಅಕ್ಕಮಹಾದೇವಿ, ಮಹಾದೇವಮ್ಮ, ಲಕ್ಕಮ್ಮ , ಲಿಂಗಮ್ಮ , ಗಂಗಾಬಿಕೆ, ನೀಲಾಂಬಿಕೆ ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ಜ್ವಲ ಸಾಕ್ಷಿಯಾಗಿದ್ದಾರೆ. ವ್ಯಕ್ತಿ ಸ್ವತಃ ಪೂಜಾ ಕೈಂಕರ್ಯ ಸಲ್ಲಿಸಬೇಕೆಂಬುದು ಇವರ ಧಾರ್ಮಿಕ ಆಚರಣೆಯ ಇನ್ನೊಂದು ಮುಖ್ಯ ಅಂಶ. ತನ್ನ ಉದ್ಧಾರವನ್ನು ತಾನೇ ಕಂಡುಕೊಳ್ಳಬೇಕು. ಒಬ್ಬನ ಪರವಾಗಿ ಇನ್ನೊಬ್ಬ ಪೂಜೆ ಸಲ್ಲಿಸುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ ಎಂಬುದು ಅವರ ವಾದ.ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧ ಶ್ರ ದ್ಧೆಯನ್ನೂ ಖಂಡಿಸಿದರು. ಒಟ್ಟಿನಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ ಧಾರ್ಮಿಕ ಸ್ವಾತಂತ್ಯ್ರಕ್ಕೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಯಿತು. ಕನ್ನಡ ಭಾಷೆ ಇವರ ವಚನಗಳಿಂದ ಅಪೂರ್ವವಾದ ಒಂದು ಶಕ್ತಿಯನ್ನೂ , ಶ್ರೀಮಂತಿಕೆಯನ್ನೂ ಪಡೆಯಿತು. ಮಾತು ಮಾಣಿಕ್ಯದ ದೀಪ್ತಿಯಾಯಿತು., ನುಡಿದುದೇ ಧರ್ಮವಾಯಿತು. ಇವರ ವ್ಯಕ್ತಿತ್ವ ಕಾಲದೇಶಗಳ ಪರಿಮಿತಿಯನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನು ಬೆಳೆಯುವ ಯುಗಪ್ರ ವರ್ತಕ ಶಕ್ತಿಯಾಗಿ ಪರಿಣಮಿಸಿದೆ. ಬಸವಣ್ಣನವರ ಶಕ್ತಿಯ ಮೂಲ ಇವರ ಅಪಾರ ಭಕ್ತಿಭಾವ, ಕೂಡಲ ಸಂಗಮ ದೇವನಲ್ಲಿಯ ಅನನ್ಯ ಶರಣಭಾವ, ಜಂಗಮಸೇವೆಯೇ ಲಿಂಗಸೇವೆ ಎಂಬ ದಿವ್ಯಭಾವ. ಇವರು ಜ್ಞಾನವೈರಾಗ್ಯಗಳ ಮಹತ್ತ್ವವನ್ನು ಅಲ್ಲಗೆಳೆಯದಿದ್ದರೂ ಭಕ್ತಿಗೆ ಪ್ರಾಧಾನ್ಯ ನೀಡಿದರು. ಶಿವಾನುಭವ ಮಂಟಪ ಇದಕ್ಕೆ ಉಜ್ವಲ ನಿದರ್ಶನ. ಅದರ ಖ್ಯಾತಿಯನ್ನು ತಿಳಿದ ಎಷ್ಟೋ ಮಂದಿ ಶಿವಶರಣರು ನಾಡಿನ ಒಳಗಿನಿಂದಲ್ಲದೆ ನಾಡಿನ ಹೊರಗಿನಿಂದಲೂ ಅಲ್ಲಿ ಸೇರಿದರು. ಅದು ಆಚಾರ, ವಿಚಾರ ಎರಡಕ್ಕೂ ಕೇಂದ್ರಸ್ಥಾನವಾಯಿತು. ಚೆನ್ನಬಸವ, ವೈರಾಗ್ಯನಿಧಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ಜೀವಜ್ಯೋತಿಗಳು ಅಲ್ಲಿಕಂಗೊಳಿಸಿದರು. ಸಹಸ್ರಾರು ಶಿವಶರಣರು ವರ್ಣ ಭೇದವಿಲ್ಲದೆ ಮೇಲು ಕೀಳೆಂಬ ಭಾವನೆ ತಾಳದೆ ಸಮಾನತೆಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. “ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವೆರೆದು ಆಚಾರವೆಂಬ ಬತ್ತಿಗೆ ಬಸವನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಾ ಶಿವನ ಪ್ರಕಾಶ. ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯ ಶಿವಶರಣರು. ಬಸವಣ್ಣನವರ ಬೋಧೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿದೆ.ಸಾಮಾನ್ಯರಿಗೂ ಅರ್ಥವಾಗುವ ವಚನ ಸಾಹಿತ್ಯ ಪ್ರವಾಹ ಆ ಕಾಲದಲ್ಲಿ ತುಂಬಿ ಹರಿಯಿತು. ಈ ವಚನಗಳು ಜಿಜ್ಞಾಸುಗಳಿಗೆ ಮುಮುಕ್ಷುಗಳಿಗೆ ಮತ್ತು ಸಾಹಿತ್ಯೋಪಾಸಕರಿಗೆ ದಾರಿದೀಪಗಳಂತಿವೆ.
ನಡೆ ನುಡಿಗಳ ಸಾಮರಸ್ಯ ಸೂಚಿಸುವ ಈ ವಚನ ಕಾಲವನ್ನು ಮೆಟ್ಟಿನಿಲ್ಲುವಂಥದು.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗವೆಚ್ಚಿ ಅಹುದೆನಬೇಕು
ನುಡಿಯೊಳಗೆ ನಡೆಯದಿದ್ದರೆ ಕೂಡಲ ಸಂಗಮನೆಂತೊಲಿವನಯ್ಯ..

ಇವರು ಮಹಾನುಭಾವರ ಪಂಕ್ತಿಯಲ್ಲಿ ನಿಲ್ಲತಕ್ಕವರು. ಇವರ ಭಕ್ತಿ ಬತ್ತಲಾರದ ತೊರೆ. ಮಾನವನ ಶ್ರೇಯಸ್ಸಿಗೂ ಪ್ರೇಯಸ್ಸಿಗೂ ಮೇಲ್ಪಂಕ್ತಿಯಾಗಿ ನಿಂತ ಹಿರಿಯ ಚೇತನ ಇವರದು. ಬಸವಣ್ಣನವರ ಸುಮಾರು ೧೪೦೦ ವಚನಗಳು ಸಿಕ್ಕಿವೆ. ಇವರು ಕನ್ನಡ ಭಾಷೆಯನ್ನೂ ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯತೆಗಳಿರಬಹುದು ಎಂಬುದನ್ನು ತೋರಿಸಿದರು. ಕವಿ ಮನೋಭಾವದಿಂದ ಕೂಡಿದ ಇವರ ವಚನಗಳು ಉಪಮೆ ರೂಪಕಾಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.

            (ಮಾಹಿತಿ: ಸಂಗ್ರಹಿತ ).

MSG BY:
Deepak.S.Ganachari. AM
GMPS UDACHAN. TQ AFZALPUR

MATHS TRICK FOR 11.

MATHS TRICK 1:
To multiply 52 and 11.
Imagine there is a space between 52. 52*11= 5_2
(Put an imaginary space in between).

Now,what to do with that space?
Just add 5 and 2 and put the result in the imaginary space.
So, 52 * 11 =572 (which is your answer).

*Lets try some more examples:
1) 35 * 11 = 3 (3+5) 5 = 385.
2) 81 * 11 = 8 (8+1) 1 = 891.
3) 72 * 11 = 7 (7+2) 2 = 792 etc..

If sum exceed by 10 then add 'the first number of sum' to the first number.
EX: If 82*11=8(8+2)+2=8(10)+2= 8+1(0)2=902.

DO U LIKE IT?

MSG BY :
DEEPAK S GANACHARI.
MASTER,GHPS KARAKIHALLI.
TQ:JEWARGI.
MOB:9972073906.

Monday, 13 April 2015

Dr.B.R.Ambedkar Jayanti 2024

ಎಲ್ಲರಿಗೂ ಭಾರತದ ಸಂವಿಧಾನಶಿಲ್ಪಿ ,ಭಾರತರತ್ನ ಡಾ//ಬಿ.ಆರ್.ಅಂಬೇಡ್ಕರ್  ರವರ 133ನೇ ಜಯಂತ್ಯುತ್ಸವದ ಅಂಗವಾಗಿ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು.

*ಡಾ.ಬಿ.ಆರ್. ಅಂಬೇಡ್ಕರ್ ರವರ ಪೂರ್ಣ ಹೆಸರು-ಭೀಮರಾವ್ ರಾಮ್‌ಜೀ ಅಂಬೇಡ್ಕರ್ .
ಇವರ -
ಜನನ - ಏಪ್ರಿಲ್ 14, 1891.
ಮರಣ - ಡಿಸೆಂಬರ್ 6, 1956.

ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಬಹುಮಖ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರ ಅಧ್ಯಯನಶೀಲತೆ ಅಪಾರವಾದುದು. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ.

*ತಂದೆ: ರಾಮಜೀ ಮಾಲೊಜಿ ಸಕ್ಪಾಲ್.

*ತಾಯಿ: ಭೀಮಬಾಯಿ ಸಕ್ಪಾಲ್.

*ಈ ದಂಪತಿಗಳ ಕೊನೆಯ&14ನೇಯ ಮಗ.

*ವಿದ್ಯಾಭ್ಯಾಸ:-
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತಿದ್ದರು, ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು. 1908ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಸ್ಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. 1913 ರಿಂದ 1916 ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು. 1915 ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. 1916 ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.

*'ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ' ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು. 1920 ರವರೆಗೆ ಮುಂಬೈಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು. ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. 1952 ಜೂನ್ 15 ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. 1953, ಜನವರಿ 12 ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

*ವೃತ್ತಿ ಜೀವನ:-
ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು. ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು. ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.

*ಅಸ್ಪೃಶ್ಯತೆಯ ವಿರುದ್ದ ಹೋರಾಟ:-
1927 ರಿಂದ 1937 ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರ ತಿಕ್ರಿ ಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸುವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು. ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರ ತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ. ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರ ದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , 1931-32 ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರ ತ್ಯೇಕ ಚುನಾವಣಾ ಕ್ಷೇತ್ರ ಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು. 1932 ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು. ಇದಕ್ಕೆ ಪ್ರ ತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು 'ಭಾರತದ ಸಂವಿಧಾನ ಶಿಲ್ಪಿ 'ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರ ಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು. ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು. ಜೊತೆಗೆ, "ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು"ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು: ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, 50,000 ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. 1908 ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

*ರಾಜಕೀಯ ಜೀವನ:-
ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, 1935 ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂ ಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು. 1939 ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. 1941 ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮೀಟಿಗೆ) ನೇಮಕ ಮಾಡಲಾಯಿತು. ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು; ಪ್ರಜಾ ಶಿಕ್ಷಣ ಸಮಾಜವನ್ನು(ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು.

*ಬರೆದ ಪ್ರ ಸಿದ್ಧವಾದ ಪುಸ್ತಕಗಳು :
ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ (ಪಾಂಪ್ಲೆಟ್ಸ್) ಪ್ರಕಾಶಿಸಿದರು.ಅವುಗಳಲ್ಲಿ ಕೆಲವು -
“ ಪಾಕಿಸ್ತಾನದ ಬಗ್ಗೆ ವಿಚಾರಗಳು “
(ಥಾಟ್ಸ್ ಆನ್ ಪಾಕಿಸ್ತಾನ್) ,
"ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು?"
( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್?) ಮತ್ತು
“ ಶೂದ್ರರು  ಯಾರಾಗಿದ್ದರು?”
( ಹೂ ವರ್ ದ ಶೂದ್ರಾಸ್?) ....ಮುಖ್ಯವಾದುವು.

*ಭಾರತದ ಸಂವಿಧಾನ ಶಿಲ್ಪಿ:-
1947 ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು. ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, 1948 ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರ ತಿಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು. ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು.

ಇವರು ಭಾರತದ ಮೊದಲ ಕಾನೂನು&ನ್ಯಾಯ ಮಂತ್ರಿಗಳಾಗಿದ್ದರು (15 AUG 1947-SEPT 1951). 1951 ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು. 1952 ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ 1952 ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು.

*ಬೌದ್ಧ ಧರ್ಮಕ್ಕೆ ಮತಾಂತರ:- ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ 1952 ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. 1935 ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್), “ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ, ಅಸ್ಪೃಶ್ಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂಸಮಾಜಕ್ಕೆ/ಹಿಂದೂಸ್ತಾನಕ್ಕೆ ಆಘಾತ ಉಂಟು ಮಾಡಿದ ಅಂಬೇಡ್ಕರ್, ಆಗಿನಿಂದಲೇ ಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು. ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ 1950 ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿ, ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು. ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ 1951 ರಲ್ಲಿ ಲೇಖನವನ್ನು ಬರೆದರು. ಅದೇ ವರ್ಷ, “ಬೌದ್ಧ ಉಪಾಸನಾ ಪಥ” ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು. 1954 ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು. ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು 1954ರ ಡಿಸೆಂಬರ್ 25 ರಂದು ಪ್ರತಿಷ್ಠಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರ ಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ “ಬುದ್ಧ ಮತ್ತು ಅವರ ಧಮ್ಮ” (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ 1956 ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಗೊಳ್ಳುವುದಾಗಿ ಪ್ರ ಕಟಿಸಿದರು. ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು. 1956 ರ ಅಕ್ಟೋಬರ್ 14 ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ 3,80,000 ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು. ಕೆಲ ವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣ ಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್” ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.

*ಕೊನೆಯ ಘಟ್ಟ :
ಇವರು ತಮ್ಮ 65ನೇಯ ವಯಸ್ಸಿನಲ್ಲಿ , 1956 ರ ಡಿಸೆಂಬರ್ 06 ನೆಯ ತಾರೀಖು ಅಂಬೇಡ್ಕರ್ ಇಹಲೋಕ ತ್ಯಜಿಸಿದರು. ಅಂಬೇಡ್ಕರ್ ಬೌದ್ಧರಾದ ಮೇಲೆ, ಕೇವಲ ಏಳು ವಾರ ಮಾತ್ರ ಬದುಕಿದ್ದರು. ಆ ಅಲ್ಪಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಶ: ಬೇರೆ ಯಾರೂ ಮಾಡಿಲ್ಲ. ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಸಹ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು. ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ “ಬುದ್ಧ ಅಂಡ್ ಹಿಸ್ ಧಮ್ಮ” ವನ್ನು, ಅವರು ತೀರಿ ಕೊಂಡ ಸುಮಾರು ಒಂದು ವರ್ಷದ ನಂತರ , 1957 ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರ ಕಟಿಸಲಾಯಿತು.

*ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ:-
ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ. ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆ ಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸಲ್ಪಟ್ಟಿದೆ. ಪ್ರ ಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು. ಪ್ರ ಜಾಪ್ರ ಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರ ಜಾ ಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ. ಅವರ ದೃಷ್ಟಿಯಲ್ಲಿ ಪ್ರ ಜಾ ಪ್ರ ಭುತ್ವ ಪ್ರ ಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರ ಜಾ ಪ್ರ ಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರ ಹಿಸಲ್ಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ . ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ. ಸಾಮಾಜಿಕ ಪ್ರ ಜಾಪ್ರ ಭುತ್ವವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರ ಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ. ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ. ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ. ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯ-ಹೀಗೆ. ಆದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಅನ್ನುವ ಪದವನ್ನು ಬಳಸಿದ್ದಾರೆ.
ಹೀಗೆ ಅಂಬೇಡ್ಕರರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ:
1. ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ,
2.ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು
3.ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ.

ಸಂವಿಧಾನವೆಂದರೆ ಪ್ರಜಾಪ್ರಭುತ್ವಗಳ ರಾಜಕೀಯ ಆಳ್ವಿಕೆಗಾಗಿ ರಚಿಸಲ್ಪಡುವ ಒಂದು ನಿಯಮಗಳ ಪುಸ್ತಕ. ಅದೃಷ್ಟವಶಾತ್ ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ 'ಸಂವಿಧಾನ ಶಿಲ್ಪಿ' ಎನಿಸಿದರು. ಆದರೆ ಅವರ ದರ್ಶನ ಭಾರತದ ಸಂವಿಧಾನ ಪ್ರತಿಬಿಂಬಿ ಸುವುದಕ್ಕಿಂತಲೂ ಭಿನ್ನವಾಗಿತ್ತು ಅನ್ನುವುದನ್ನು ಗಮನಿಸಬೇಕು. ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ಅವರು ತೃಪ್ತರಾಗಿರಲಿಲ್ಲ. ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ ಅದಕ್ಕೆ ಉಳಿಗಾಲವಿಲ್ಲವೆಂದು ಅವರು ಅರಿತಿದ್ದರು. ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು. 'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, 'ಲಿಬರಿಸಂ'ನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು. ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ. ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು! ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕು ಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು. ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?" ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದ ಸಂವಿಧಾನದ ಉದೇಳನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ 17 ಡಿಸೆಂಬರ್ 1946 ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು. ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ , ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು. ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು 'ಸಂವಿಧಾನದ ಒಂದು ಭಾಗ'ವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು. ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರದ ಏಕಸ್ವಾಮ್ಯದಲ್ಲಿರಬೇಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು. ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು. ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ (ಸರ್ಕಾರ ) ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ (ಸರ್ಕಾರ ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು.

#ಮೊದಲಿಗರುಹ&ಏಕೈಕರು/ವಿಶೇಷತೆಗಳು:

* Phd (ಡಾಕ್ಟರೇಟ್) ಪದವಿ ಪಡೆದ ಮೊಟ್ಟ ಮೊದಲ ಭಾರತದ ವಿದ್ಯಾರ್ಥಿ ನಮ್ಮ ಅಂಬೇಡ್ಕರ್.

* ಅತಿಹೆಚ್ಚು ವಿದ್ಯಾಭ್ಯಾಸ ಮಾಡಿರುವ ವಿಶ್ವದ ಏಕೈಕ ರಾಷ್ಟ್ರನಾಯಕ ನಮ್ಮ ಅಂಬೇಡ್ಕರ್.

* ಅರ್ಥಶಾಸ್ತ್ರದಲ್ಲಿ Dsc ಪದವಿ & ಕಾನೂನು ಶಾಸ್ತ್ರದಲ್ಲಿ BAR-AT-LAW ಪದವಿ ಪಡೆದ ಮೊದಲಿಗರು & ಏಕೈಕ ಭಾರತೀಯ ನಮ್ಮ ಅಂಬೇಡ್ಕರ್.

* ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳ ಅಧ್ಯಾಯನಕ್ಕೆ ವಿಶ್ವದಲ್ಲೇ ಪ್ರಖ್ಯಾತವಾಗಿರುವ ಬ್ರಿಟನ್ನಿನ "ಲಂಡನ್ ಸ್ಕೂಲ್  ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸ್" ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಡಾ.ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸಲಾಗಿದೆ. (ಈ ಗೌರವಕ್ಕೆ ಪಾತ್ರರಾಗಿರುವ ಭಾರತದ ಏಕೈಕ ವ್ಯಕ್ತಿ ನಮ್ಮೆಲ್ಲರ ಅಂಬೇಡ್ಕರ್).

*ವಿಶ್ವದ ಬೃಹತ್ ಹಾಗೂ ಪ್ರತಿಷ್ಠಿತ ಗ್ರಂಥಾಲಯವಾದ ಲಂಡನ್ನಿನ 'ಬ್ರಿಟಿಷ್ ಮ್ಯೂಸಿಯಂ ಲೈಬ್ರರಿ'ಯಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಎರವಲಾಗಿ ಪಡೆದು ಓದಿರುವ ವಿಶ್ವದ ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ. (ಈ ಮಾಹಿತಿಯನ್ನು ಅಲ್ಲಿನ ಗ್ರಂಥಾಲಯದಲ್ಲಿ ದಾಖಲು ಮಾಡಲಾಗಿದೆ).

* ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಅಮೇರಿಕದ ಕೊಲಂಬೀಯಾ ವಿಶ್ವವಿದ್ಯಾಲಯದ "ಕಾನೂನ ಮತ್ತು ಸಂವಿಧಾನ" ಅಧ್ಯಯನ ವಿಭಾಗಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರಿಡಲಾಗಿದೆ.

* 2011ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಜಗತ್ತಿನ 100 ಜನ ಪ್ರತಿಭಾವಂತ ಘನ ವಿಧ್ವಾಂಸರ ಪಟ್ಟಿ ಮಾಡಿತ್ತು. ಈ 100 ಜನರ ಪಟ್ಟಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮೊದಲನೇ ವ್ಯಕ್ತಿಯಾಗಿದ್ದರು.

* ತನ್ನ ಮನೆಯಲ್ಲಿ 50,000 ವಿದ್ವತ್ಪೂರ್ಣ ಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿರುವ ಜಗತ್ತಿನ ಏಕೈಕ ವಿದ್ವಾಂಸ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ.

*ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರ 'ವಿಶೇಷ ಗೌರವಕ್ಕೆ' ಪಾತ್ರರಾದ ಏಕೈಕ ಭಾರತೀಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್.

*ಬ್ರಿಟನ್ನಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ರವರ ವಿದ್ವತ್ತು, ವಾಕ್ ಚಾತುರ್ಯ, ಪ್ರತಿಭೆ ಹಾಗೂ ಭಾರತದ ಶೋಷಿತರ ಕುರಿತು ಅವರು ಮಾಡಿದ ಹೃದಯ ಕಲಕುವಂತಹ ಭಾಷಣಕ್ಕೆ ನಿಬ್ಬೆರೆಗಾದ ಬ್ರಿಟನ್ ದೊರೆ ಮತ್ತು ಮಹಾರಾಣಿಯವರು ಅಂಬೇಡ್ಕರ್ ರವರನ್ನು ಅರಮನೆಗೆ ಆಹ್ವಾನಿಸಿ ಔತಣಕೂಟ ಏರ್ಪಡಿಸಿ ವಿಶೇಷ ಗೌರವ (Honour) ನೀಡಿದರು. ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರಿಂದ ಈ ರೀತಿ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯ ಬಾಬಾ ಸಾಹೇಬ್ ಅಂಬೇಡ್ಕರ್ ರವರೊಬ್ಬರೆ.

(ಬ್ರಿಟನ್ ಪ್ರಧಾನಿ, ಬ್ರಿಟನ್ ದೇಶದ ರಾಜಕೀಯ ಧುರೀಣರು, ಭಾರತದ ಮಹಾರಾಜರುಗಳು, ಸಾಮಂತರು, ಅಗ್ರ ನಾಯಕರು ಸೇರಿ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ 89 ಜನ ಸದಸ್ಯರಲ್ಲಿ ಅತೀ ಚಿಕ್ಕವಯಸ್ಸಿನವರೆಂದರೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (ಕೇವಲ 39ವರ್ಷಗಳು), ಅದೇ ರೀತಿ ಆ ಸದಸ್ಯರುಗಳಲ್ಲೇ ಅತೀ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರೂ ಸಹ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಆಗಿದ್ದರು.)

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇವಲ ವ್ಯಕ್ತಿಯಲ್ಲ, ಅವರು ಈ ದೇಶದ ಶಕ್ತಿ&ಗೌರವ ಕಳಸ.

ಈ ಮಹಾನ ಚೇತನಕ್ಕೆ ಅನಂತ ಅನಂತ ನಮನಗಳು.

MSG COLLECTED BY:
DEEPAK S GANACHARI.
CLUSTER RESOURCE PERSON(CRP)
BILWAR.TQ:JEWARGI.

Saturday, 11 April 2015

ಸರೋವರಗಳ ಬಗ್ಗೆ ಒಂದಿಷ್ಟು ಮಾಹಿತಿ

ಸರೋವರಗಳು:

ಭೂಪ್ರದೇಶದಿಂದ ಆವೃತವಾಗಿರುವ ಗಣನೀಯ ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ.

ಪ್ರ ಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳನ್ನು ಒಳಪ್ರದೇಶದ ಸಮುದ್ರ ಗಳೆಂದೂ ಕರೆಯಲ್ಪಡುತ್ತವೆ.

ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.

*ಪ್ರ ಮುಖ ಸರೋವರಗಳು*
1)ಪ್ರ ಪಂಚದ ಅತ್ಯಂತ ದೊಡ್ಡ ಸರೋವರ -ಕ್ಯಾಸ್ಪಿಯನ್ ಸಮುದ್ರ   (ರಷ್ಯಾ ).

2)ಪ್ರ ಪಂಚದ ಅತ್ಯಂತ ಆಳದ ಮತ್ತು ಅತ್ಯಂತ ಹೆಚ್ಚು ಜಲಸಮೂಹವನ್ನು ಹೊಂದಿರುವ ಸರೋವರ-ಬೈಕಾಲ್ ಸರೋವರ (ಸೈಬೀರಿಯಾ).

3)ಭಾರತದ ಅತಿ ದೊಡ್ಡ ಸರೋವರ-ಚಿಲ್ಕಾ (ಓಡಿಸ್ಸಾ ).

4)ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ-ಸಾಂಬಾರ(ರಾಜಸ್ಥಾನ).

5)ಉತ್ತ ರ ಭಾರತದ ಅತಿ ದೊಡ್ಡ ಸರೋವರ-ಲೋಕ್ತಾಕ ಸರೋವರ(ಮಣಿಪುರ).

MSG BY:GKLIGHTS
DEEPAK S GANACHARI.
A.T, KARAKIHALLI. TQ:JEWARGI.

Sunday, 5 April 2015

BABU JAGAJIVAN RAM JAYANTI 2024 SPEECH

         About Babu Jagjivan Ram:
      
      A beginner of Green Revolution.

Today on 5 Apr 2024,we are observing 118th Birth Anniversary of Babu Jagjivan Ram.He was (a known dalit political leader) born on 5th April in 1908 in Chandwa a small village in Shahabad district now named Bhojpur in Bihar State.

His birthday was observed as 'Samata Diwas'.This day is so called to match his belief of bringing equality among all in the society.

Father : Shobhi Ram was in British army where he learnt English and became proficient in it.

Mother: Vasanti Devi.

Brothers&Sisters: He had a elder brother Sant Lal and three Sisters.

Spouses : He was married Indrani Devi on June 1, 1935(His second wife). (His first wife died in 1933).

Son: Suresh.

Daughter : Meira.

He got B.Sc degree from Banaras Hindu University.

Babu Jagjivan Ram endearingly called 'Babuji' was a Freedom Fighter and a crusader for Social Justice.

In 1937 he elected to Bihar Legislative Assembly.

In 1946 he became the youngest minister in Jawaharlal Nehru Governemnt , the first Union Cabinet as Labour Minister after Independence.

He became the first non congress party (Socialist Janata Party) Deputy PM of India during Mar 1977-Aug 1979.

On 24 January 1979 he became Deputy Prime Minister of the country in addition to charge of Defence Minister.

In 1980 he formed Congress(J).

Last Breath : July 6,1986.

Message By:
GKLIGHTS.
Deepak S Ganachari.
AM GMPS UDACHAN.
TQ:Afzalpur. Dist:Kalaburagi.
Mobile No: 9972073906.

Friday, 3 April 2015

KNOW YOUR NATURE BY YOUR BLOOD GROUP

Do you know Your Blood group?.
It also speaks about your basic nature of behaviour.
READ &TRY YOURSELF.
A(+) : Good leadership.
A(-) : Hardworking.
B(+) : Can Sacrifice for others and very ambitious, tolerance.
B(-) : Non flexible, Selfish & Sadistic.
O(+) : Born to help.
O(-) : Narrow minded.
AB(+) : Very difficult to understand.
AB(-) : Sharp & Intelligent.

DO YOU AGREE WITH THIS?